Yare Bandu Kedavidaru (ಯಾರೇ ಬಂದು ಕೆಡವಿದರು)


ಯಾರೇ ಬಂದು ಕೆಡವಿದರು
ಎಲ್ಲೇ ನಿಂತು ಗುಡುಗಿದರು
ಭಾರತದ ಭವ್ಯ ಸಂಸ್ಕೃತಿ ಎಳ್ಳಷ್ಟು ಕೆಡವದು...(2)

ಭಾರತ ಸ್ವತಂತ್ರ ಸಂದೇಶ
ನೆಮ್ಮದಿಯ ಶಾಂತಿ ಪ್ರತೀಕ-2
ಸ್ವಾತಂತ್ರ್ಯ ಮಣ್ಣಿನ ವೀರ ಯೋಧರ ಚರಿತೆ ಸುಡುವುದೇ?
ಈ ಶುಭ್ರವಸ್ತ್ರ ದಾಡಿಯವರು ದೇಶದ್ರೋಹಿಯೇ?
ಧರ್ಮ ಮೈತ್ರಿಯ ಕೆಡಿಸೊ ಮುನ್ನ
ಸಂಸ್ಕೃತಿಯ ಹೂಳುವ ಮುನ್ನ
ನರಗಳಲಿ ಹರಿಯುವುದು ಭಾರತದ ಭಿಕ್ಷೆಯೇ....!

ಅವ ದಕ್ಷಿಣದವ..ಇವ ಪಶ್ಚಿಮದವ..
ಅವ ಹಿಂದು ಕ್ರೈಸ್ತ ‌ಮುಸಲ್ಮಾನ ಆದರೇನಂತೆ
ಅವ ಕುರುಡನ ಮಗ..ಇವ ಕಿವುಡನ ಮಗ
ರಕ್ತದ ಬಣ್ಣವು ಕೆಂಪೆ ಗಾಳಿಯು ಒಂದೆ...

ದೇಶದ ಏಳ್ಗೆಗೆ ದುಡಿದು
ಹೊಸ ಗೀತೆಗೆ ಬದುಕನು‌ ತೆರೆದು
ಬಾನನು ಅಳೆದು ಸುರಿದು ಹೊಸ
ಸೃಷ್ಟಿಯ ಕಟ್ಟುವ ಕೂಡಿ...
ನಮ್ಮುಸಿರು ಮೀಸಲಿಟ್ಟರಾದರೂ.ಹಿಂಜರಿಯದು..
(ಧರ್ಮ ಮೈತ್ರಿಯ ಕೆಡಿಸೊ ಮುನ್ನ
ಸಂಸ್ಕೃತಿಯ ಹೂಳುವ ಮುನ್ನ
ನರಗಳಲಿ ಹರಿಯುವುದು ಭಾರತದ‌ ಭಿಕ್ಷೆಯೇ..)
(ಯಾರೆ....)
......

ಗಾಂಧಿ ನೆಹರು ಸೇರಿ..ಟಿಪ್ಪು ಅಲಿ ಅಝಾದಿ..
ವೀರ ಯೋಧ ಪಡೆಗಳಿಗೆಲ್ಲ ಎಲ್ಲಿಯ‌ ಭೇದವೇ..?
ಝಾನ್ಸಿ‌ ಲಕ್ಷ್ಮೀ ಬಾಯಿ..ಮೌಲಾ ಹಝ್ರತ್ ಮೊಹಾನಿ
ಹನಿ ರಕ್ತ ಸುರಿದೆ ಇಲ್ಲ ಅಹಿಂಸೆಯ ಕ್ರಾಂತಿ...

ನಮ್ಮ ದೇಶವೇ ವಿಶೇಷ..
ಉಕ್ಕು ಪ್ರೇಮದ ಹೆಸರ ದೇಶ
ಅನುಕಣಕೆ ಇಂಪನು ನೀಡುವ ಶಾಂತಿ ನಮ್ಮಯ ದೇಶ..
ಹಲ ವಿಧಗಳ‌ ಭಾಷೆ ವೇಷ ಇಲ್ಲಿಯ ಸವಿಶೇಷ....

ಬಾರತದ ಭವ್ಯ ಪತಾಕೆ..
ಹಾರಿಸುವ ನಾವೆಲ್ಲ ಬನ್ನಿ
ಭಾರತದ ಚೈತನ್ಯ ಬೆಳೆಸುವ ಓ‌ಗೆಳೆಯಾ...
( ಯಾರೆ...)


Post a Comment

0 Comments